Friday, May 29, 2009

Simply ಒಂದು ಮಾತು-೯

 About a Novel....

    ಇದು simply ಒಂದು ಮಾತಲ್ಲ ಕಣ್ರೀ... ಯಾಕಂದ್ರೆ ಅದು simply ಒಂದು Book ಅಲ್ಲ... ಅದು simple ಆಗಿರೋ ಒಂದು great book... ಅಲ್ಲೇ ಇರೋದು ಅದರ speciality... ಅದೇನೂ ದಪ್ಪ ಇಲ್ಲ.... ಅಲ್ಲಿನ language ಕೂಡಾ tough ಅಲ್ಲ....ಎಲ್ಲಾ vacabulary ತಡವಿದರೇನೇ ಸಿಗುವ words ಅಷ್ಟೇ... ನಿಮಗೆ ಇಲ್ಲಿ ಬೇಕಾಗಿರೋದು 'ನಿದಾನವಾಗಿ ಓದೋ Mentality ಅಷ್ಟೇ... ಹಾಗಂತ Patience ತಂದ್ಕೋಬೇಕಾಗಿಲ್ಲ...ಅದೇ ಓದಿಸ್ಕೊಂಡು ಹೋಗುತ್ತೆ. ನೀವದನ್ನ ತೆರೆದರೆ..ಹತ್ತಾರು ಗೆರೆ ಓದಿದ್ರೆ... Book ಮುಚ್ಚೋದು ಬಿಡಿ-Eyelids ಕೂಡಾ ಮುಚ್ಚೋದಿಲ್ಲ... ಹಾಗಾದ್ರೆ Love Storyನೇ ಇರ್ಬೇಕು ಅಥವಾ Crime Story ಅಂದ್ಕೊಂಡ್ರಾ... ಅಥವಾ Detective...? ಒಂದೇ ಮಾತ್ನಲ್ಲಿ ಹೇಳ್ಬೇಕೂಂದ್ರೆ-"ಯಾವ್ದೂ ಅಲ್ಲ ಅಥವಾ ಎಲ್ಲಾನೂ ಕೂಡಾ...!!!".

ಅದೊಂತರಾ... 'All in One Book'... ಅಲ್ಲೊಂದಷ್ಟು Science ಇದೆ. ಒಂದಷ್ಟು ಗ್ರಹಗಳ ಬಗ್ಗೆ-ಗ್ರಹವೀಕ್ಷಣೆ ಬಗ್ಗೆ...Mental and Manual Calculations.. Ways of thinking...Innovative Inventions ಇದೆ-ಅದಕ್ಕೇ ಅದೊಂತರಾ Detective Storyನೇ.. ಈ Book ಇಡೀ ವಿಶ್ವಾನೆ ತಂದು ನಿಮ್ಮ ಕೈಲಿಡುತ್ತೆ... ಗುಡಿಸಲಿಂದ..ಹಳ್ಳಿಗೆ...ಅಲ್ಲಿಂದ ದಿಲ್ಲಿಗೆ ನಿಮ್ಮನ್ನ ನಡೆಸಿ, ಲಂಡನ್‍ಗೆ..ಸಾನ್‍ಪ್ರಾನ್ಸಿಸ್ಕೋಗೆ..ರಷ್ಯಾಕ್ಕೆ...ಚಂದ್ರನವರೇಗೂ ಮುಟ್ಟಿಸುತ್ತೆ..ಮನಮುಟ್ಟುತ್ತೆ..ಮನಸ್ಸು ಬಿಚ್ಚಿಸುತ್ತೆ...ಮೆದುಳು ಮೇಯಿಸುತ್ತೆ...ಬೆಚ್ಚಿ ಬೀಳಿಸುತ್ತೆ ಕೂಡಾ..!!?

ಇಲ್ಲಿ ಅವಿಧ್ಯಾವಂತ ಹಳ್ಳಿಗರನ್ನ ವಂಚಿಸುವ ಒಡೆಯರ ಕಥೆಯಿದೆ...ಜೀವಭಯದಿಂದ ತತ್ತರಿಸಿದವರ-ದುಃಖ ಒತ್ತರಿಸುವ ವ್ಯಥೆಯಿದೆ...ಆಸ್ತಿಕತೆಯನ್ನೇ ಬಂಡವಾಳವಾಗಿಸಿದವರ ಚಿತ್ರಣವಿದೆ....'ಪ್ರಳಯ'-ತಾಂಡವವಾಡುವಾಗಲೂ ಅದರೆಡೆಯೆಲ್ಲಿ ತಮ್ಮ ಬೇಳೆ ಬೇಯಿಸುವ ಪ್ರಚಂಡ-ರಾಜಕಾರಿಣಿಗಳಿದ್ದಾರೆ...ಬಡತನದಲ್ಲಿ ನಡುಗಿ ನಲುಗಿದವರಿದ್ದಾರೆ....ನಿರುದ್ಯೋಗಿಯ ವೇದನೆಯಿದೆ...ಅಧಿಕಾರಿಗಳ ಧರ್ಪವಿದೆ..ನಾಟಕೀಯ Interviewನ ಅಳಿಯದೆ ಉಳಿಯಬಲ್ಲ ಚಿತ್ರಣವಿದೆ...ಸಂಸಾರದ ಭಾರ ಹೊತ್ತ ಹೆಣ್ಣಿನ ಕಥೆಯಿದೆ...."ಬದುಕುವ ಪ್ರಶ್ನೆ ಬರುವಾಗೆ ಆಕೆಗಿಂತಲೂ ಗಂಡಿಗೇ ಆಧ್ಯತೆ" ಎಂಬ ಒಪ್ಪಬಾರದ ನಿತ್ಯಸತ್ಯವಿದೆ.

ಪ್ರಳಯದಿಂದ ಬಚವಾಗಲು ಒಂದಿಷ್ಟು ಪ್ರದೇಶಕ್ಕೆ ಕಿತ್ತಾಡಿ ಪ್ರಳಯವನ್ನೇ ನಿರ್ಮಿಸ ಹೊರಟ ಒರಟ ವಿಶ್ವರಾಷ್ಟ್ರಗಳಿವೆ. ಸಾಯುವಾಗ ಎಲ್ಲವನ್ನೂ ಅನುಭವಿಸಿ ಬಿಡುತ್ತೇವೆ ಎಂಬ attitudeನವರಿದ್ದಾರೆ....ಪ್ರಾಣಬೀತಿಯ Mentalityಯ ಚಿತ್ರಣವಿದೆ....."ಸಾಯುವ ಸಮಯ ಯಾಕೆ ಪೂರ್ವನಿಗದಿಯಾಗಿಲ್ಲ? ಆದರೇನಾದೀತು?-ಎನ್ನುವುದಕ್ಕೆ ಇಲ್ಲಿದೆ ಉತ್ತರ. ಇಲ್ಲಿ ಸಾಯುವವರೇಗೂ ಬದುಕಲು ಓಡುವವನೊಂದೆಡೆಯಾದರೆ...ಮರುದಿನ ಸಾಯುವ ಮುದುಕನಿಗೋಸ್ಕರ ಪ್ರಾಣಬಿಡುವ ಯುವಕನಿನ್ನೊಂದೆಡೆ. Love Story- ಅಂದ್ನಲ್ಲ...ಹೌದು! ಅದೊಂದು ನಿರ್ಮಲ Love Story ಕೂಡಾ!! ಸಂಸ್ಕ್ರತಿಯನ್ನು ಮೀರಿ Enjoy ಮಾಡುವವರಲ್ಲ ಇಲ್ಲಿನ LOVEಗಳು- I mean ಪ್ರೇಮಿಗಳು. ಅವರು ಮನದ ಮನದಾಳದಿಂದ ಪ್ರೀತಿಸುವವರು....ಸಾವ ಕೊನೆಹಂತದಲ್ಲೂ....ಭೂಮಿಯ ಮಡಿಲಾಳದ...ಆ ಏಕಾಂತದಲ್ಲೂ-ಒಬ್ಬರನ್ನೊಬ್ಬರು.. Permission ತಗೊಂಡು Touch ಮಾಡುವವರು...!! ಅದೇ ಇಲ್ಲಿನ Specialityರೀ....

ಎಲ್ಲಾ Provisions ಇದ್ದೂ...ಯುಗಾಂತವನ್ನು ಕಂಡೂ ಕಾಣದಂತೆ ಕುಳಿತ... Observatoryಗಳನ್ನೆಲ್ಲ ಮುಚ್ಚಿ-ಕೈಚೆಲ್ಲಿ ಕುಳಿತ ವಿಶ್ವವಿಜ್ಞಾನಿಗಳೊಂದೆಡೆಯಾದರೆ...ಕೇವಲ ಒಂದು Telescopeನಿಂದ ಬ್ರಹ್ಮರಹಸ್ಯವನ್ನು ಭೇಧಿಸಿ...Descover ಮಾಡಿ....ಬರೇ Mental Calculationsನಿಂದ....Seconds ಕೂಡಾ ತಪ್ಪಿಲ್ಲದೆ-Accurate ಆಗಿ ಯುಗಾಂತವನ್ನು ಮನಗಂಡ Indian Professor ಇನ್ನೊಂದೆಡೆ!! ಯುಗಾಂತಕ್ಕೆ ಕ್ಷಣಗಣನೆ ಮಾಡುವವರು ಅತ್ತಕಡೆಯಾದರೆ,.. ತಮ್ಮ ಬೇಳೆ ಬೇಯಿಸುವ, ಕಚ್ಚಾಡುವವರೊಂದೆಡೆಯಾದರೆ,..ಇದರೆ ಪರಿವೆಯೇ ಇಲ್ಲದವರು ಮತ್ತೊಂದೆಡೆಯಾದರೆ,-60ರ ಹರೆಯದ ಮುದುಕನೊಬ್ಬ, ಇತ್ತ ಕಡೆ 'ಯುಗಾಂತಕ್ಕೊಂದು ಅಂತ್ಯ' ಹುಡುಕುವುದರಲ್ಲಿ ಮಗ್ನನಾಗುತ್ತಾನೆ!! ವಿಶ್ವ ಕೈಕಟ್ಟಿ ಕುಳಿತಾಗ-ಈತ ವಿಶ್ವ ರಕ್ಷಣೆಗೆ ಸೊಂಟಕಟ್ಟಿ ನಿಲ್ಲುತ್ತಾನೆ...ಜೀವಸಂಕುಲದ ರಕ್ಷಣೆಯ ಪಣತೊಡುತ್ತಾನೆ..ಅಸಂಭವವಾದ ಕಾರ್ಯಕ್ಕೆ ಕೈ ಹಾಕುತ್ತಾನೆ!! ಕೊನೆಗೂ... "Eureka..!!!" -'Yes!..Oxigen atoms..Ozone...Magnetic Field...'- ಮುದುಕನಿಗೆ ಸಾಧಿಸಿದ ಸಂತೋಷ... ಆಹಾ! ತನ್ನ ಕನಸು.. 'Nobel Prize!!'..?.. " ಛೆ! ಅಲ್ಲ.. ವಿಶ್ವಮಾನವಕುಲವನ್ನು ರಕ್ಷಿಸಿದ ಸಂತೋಷ " 'Eureka' ಎಂದು ಕೀರಿಟ್ಟ... ಶಬ್ದ ಮಾತ್ರ ಹೊರಬಂತು... ಆತ  Laboratoryಯಿಂದ ಹೊರಬರಲಾರದೇ ಹೋದ..... ಯುಗಾಂತವಾಯಿತು.....!!!

ಅದೊಂದು ಯುಗಾಂತ...ಜನರ ಅನ್ಯಾಯಗಳಿಗೊಂದು ಅಂತ್ಯ...ಅನಾಚಾರ...ಅತ್ಯಾಚಾರ..ಅನಾಗರೀಕತೆಗಳಿಗೊಂದು ಅಂತ್ಯ...ಅಸಮಾನತೆಗೆ, ಹೊಲಸು ರಾಜಕಾರಣಕ್ಕೊಂದು ಅಂತ್ಯ....ಶಸ್ತ್ರಭಂಢಾರಕ್ಕೊಂದು ಅಂತ್ಯ... ದಣಿದವರನ್ನು ಮಣಿಸುವ ಧನಿಗಳಿಗೆ, ಧನಿಕರೆಡೆಯಲ್ಲಿ ಬತ್ತಿಹೋದ ಬಡ ನೋವಿನ ದ್ವನಿಗೆ ಒಂದು ಅಂತ್ಯ... ಗಂಡು-ಹೆಣ್ಣೆಂದು ಬೇಸತ್ತ ಹೆಣ್ಣೋರ್ವಳ ಕೂಗಿಗೆ-ಭಗವಂತನ ಓಗೊಡುವಿಕೆ-ಈ ಯುಗಾಂತ...ಹೊಸತೊಂದು ಯುಗಬರಲೆಂಬ ಅಕೆಯ ಆಸೆಗೆ ಆಸರೆ- ಈ ಯುಗಾಂತ!!!

Oh! Yes! ಆ Book ಯಾವುದೂಂತ ಹೇಳ್ಲೇ ಇಲ್ವಲ್ಲ.... "ನಕ್ಷತ್ರ ಜಾರಿದಾಗ..." ಅಂತ.. ಇದರ ಮೂಲ Yugantam ಅಂತ, ಯಂಡಮೂರಿ ವೀರೇಂದ್ರನಾಥ್ ಬರೆದಿರೋದು.... ಕನ್ನಡಕ್ಕೆ ಅನುವಾದಿಸಿದವರು-ರವಿ ಬೆಳಗೆರೆ.

ಅದಕ್ಕೇ! ಇದು Simply ಒಂದು Book ಅಲ್ಲ.... ಆ Book ಈ ವಿಶ್ವದಲ್ಲಿ ಇದೆ ಅನ್ಸೋದೇ ಇಲ್ಲ...ವಿಶ್ವಕ್ಕೆ-ಯುಗಾಂತವಾಗಿದೆಯಲ್ಲ.....!!? ಅದಕ್ಕೇ...ಇಡೀ ವಿಶ್ವಾನೇ ಆ  Bookನಲ್ಲಿ ಇದೆ!!!

~Feb 2007

No comments:

Post a Comment